ಹುಲುಸು

ಹೊಲಸಲ್ಲೇ ಹೊರಳಾಡುವುದು
ನಮಗೆ ಒಗ್ಗಿ ಹೋಗಿದೆ
ಊರ ಹತ್ತಿರ ಹೊರದಾರಿಗಳೆಲ್ಲ
ಬಯಲು ಕಕ್ಕಸುಗಳು
ಊರೂಳಗೆ ಹೋಗುವಾಗ ನಾವು
ಮೂಗು ಮುಚ್ಚಿಕೊಳ್ಳುವುದಿಲ್ಲ
ಏಕೆಂದರೆ ದುರ್ವಾಸನೆಗೆ ಸಹಜವಾಗಿ
ಒಗ್ಗಿಕೊಂಡ ದುರ್ವಾಸರು ನಾವು
ದೇವರುಗಳಿಗೆ ಮಾತ್ರ ಹೆದರುತ್ತೇವೆ
ವರ್ಷಕ್ಕೊಮ್ಮೆ ದೇವರ ಹಬ್ಬಕ್ಕೆ
ಮನೆ ಮನೆಗೆ ಸುಣ್ಣ ಬಣ್ಣ
ಓಣಿಗಳು ಅಲ್ಪಸ್ವಲ್ಪ ಸ್ವಚ್ಛ
(ಈಗಿನ ದೇವರು ಮಂತ್ರಿ ಮಾನ್ಯರು
ಬಂದಾಗಲು ಅಷ್ಟೆ)
ದೇವರು ಹೇಳಿಕೆ ಕೊಡುತ್ತವೆ
ಕೇಳಿದ್ದು ಕೊಡುತ್ತವೆ
ಎಂಬ ವದಂತಿ ಹಬ್ಬಿದರೆ ಸಾಕು
ಮರ ಸುತ್ತಿ ಚಪ್ಪಲಿ ಗುಡ್ಡೆ ಹಾಕುತ್ತೇವೆ
ಕೊಂಬೆಗಳಿಗೆ ತೊಟ್ಟಿಲು ಕಟ್ಟುತ್ತೇವೆ
ಮೈಮೇಲೆ ಬಂದು ಪೂಜಾರಿ
ಹೂಂಕರಿಸುತ್ತಾನೆ ಅಪ್ಪಣೆ ಕೊಡುತ್ತಾನೆ
ಭಯಭಕ್ತಿಯಿಂದ ಆರು ಮೊಳ ಮೈಯ
ಮೂರು ಗೇಣು ಮಾಡಿಕೊಂಡು
ಅಡ್ಡ ಬೀಳುತ್ತೇವೆ ಕಾಣಿಕೆ ಕೂಡುತ್ತೇವೆ
ತಿಂಗಳು ತಿಂಗಳು ವಾರಾವಾರಾ
ಆ ದೇವರಿಗೆ ತಪ್ಪದೆ ನಡೆದುಕೊಳ್ಳುತ್ತೇವೆ

ವಾಹನಗಳ ಸಾಲು ಸಾಲು
ಗುಂಪು ಗುಂಪು ಕುರಿಗಳ ಜಾತ್ರೆ
ಪುಣ್ಯಕ್ಷೇತ್ರಗಳ ಹೊಳೆಹಳ್ಳಗಳ
ದಂಡೆಗಳು ಶರೀರ ತ್ಯಾಜ್ಯ ತಿಂಡಿ ತ್ಯಾಜ್ಯ
ಗಳಿಂದ ಗಬ್ಬೆದ್ದು ನಾರುತ್ತವೆ
ನಾವು ಅಲ್ಲಿ ಮೂಗು ಮುಚ್ಚಿಕೊಳ್ಳದೆ
ಸೇವೆಗಳ ಮಾಡಲು ಹೋಗುತ್ತೇವೆ
ಧನ್ಯರಾಗುತ್ತೇವೆ
ದೇಹವೇ ದೇವಾಲಯವೆಂದು ಸಾರಿ
ಮೌಢ್ಯಗಳ ಹೊಲಸು ತೊಳೆಯಲು
ನಮ್ಮ ನಿಮ್ಮೊಳಗಿಂದಲೇ ಮೇಲೆದ್ದು ಬಂದ
ಮಾದಾರ ಮೇದಾರ ಡೋಹಾರ ಕುಂಬಾರ
ಕಂಬಾರ ಮಡಿವಾಳ ನೇಕಾರರಾದಿ
ಶರಣರು ಇದೇ ನೆಲದಲ್ಲೇ ಹುಟ್ಟಿಬಂದರೇ!
ಅವರಿಗೂ ಗುಡಿ ಮಠಗಳ
ಕಟ್ಟಿದ್ದೇವೆ ಬಿಡಿ
ನಮ್ಮ ಮಲಿನ ಮೌಢ್ಯಗಳನ್ನೆಲ್ಲ
ಅವುಗಳ ಸುತ್ತ ಗುಡ್ಡೆ ಹಾಕಲು
ಹೊಲಸು ಹುಲುಸು ಎನ್ನುತ್ತೇವೆ
ಹೊಲಸು ನಮಗೆ ಒಗ್ಗಿ ಹೋಗಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ತ್ರೀ
Next post ನಾನೊಬ್ಬನೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys